05 April 2009

ಏಸುದಾಸ್ ಕಛೇರಿ

ಕೋಟೆ ಪ್ರೌಢಶಾಲಾ ಮೈದಾನದಲ್ಲಿ ಇಂದು ಸಂಜೆ ಇದ್ದುದು ಡಾ| ಕೆ. ಜೆ. ಏಸುದಾಸ್ ರವರ ಕಛೇರಿ. ಜತೆಗೆ ಹಿಮ್ಮೇಳದಲ್ಲಿ ಪಿಟೀಲಿನಲ್ಲಿ ವಿದ್ವಾನ್ ನಾಗೈ ಮುರಳೀಧರನ್, ಮೃದಂದಗಲ್ಲಿ ವಿದ್ವಾನ್ ತಿರುವಾರೂರು ಭಕ್ತವತ್ಸಲಂ, ಘಟಂನಲ್ಲಿ ವಿದ್ವಾನ್ ವೈಕೋಂ ಗೋಪಾಲಕೃಷ್ಣನ್.

ಕಾರ್ಯಕ್ರಮದ ನಿರೂಪಕರು ಏಸುದಾಸ್ ಇತ್ತೀಚೆಗೆ ತಾತ ಆದ ವಿಚಾರವನ್ನು ಹಂಚಿಕೊಂಡರು. ಮುಂಚೆ ಇವರ ಗುರುಗಳಾದ ಚೆಂಬೈ ವೈದ್ಯನಾಥ ಭಾಗವತರ ಕಛೇರಿ ಖಾತ್ರಿ ಮಾಡಿದ ನಂತರ ಸಂಗೀತೋತ್ಸವದ ಇತರ ಕೆಲಸ ಶುರು ಮಾಡ್ತಾ ಇದ್ರಂತೆ. ಈಗ ಏಸುದಾಸರ ಕಛೇರಿ ಮೊದಲು ಗೊತ್ತು ಮಾಡುತ್ತಾರಂತೆ.

ಸಂಜೆ ೬-೩೦ಕ್ಕೆ ಆರಂಭವಾಗಬೇಗಿದ್ದ ಕಛೇರಿ ಶುರುವಾಗಿದ್ದು ೭ ಘಂಟೆಗೆ, ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಹಾಗೂ ಸಂಸದ ಅನಂತಕುಮಾರ್ ರವರು ಕಲಾವಿದರನ್ನು ಅಭಿನಂದಿಸಿದ ನಂತರ. "ಸರಸಾಂಗಿ" ವರ್ಣದಿಂದ ಆರಂಭಿಸಿದ ಏಸುದಾಸರು ೨-೩ ಕೃತಿಗಳ ನಂತರ ಸಭಿಕರ ಬೇಡಿಕೆಯ ಮೇರೆಗೆ "ಎಂದರೋ ಮಹಾನುಭಾವುಲು" ಎತ್ತಿಕೊಂಡರು. ಶ್ರೀರಾಗದಲ್ಲಿರುವ ತ್ಯಾಗರಾಜರ ಪಂಚರತ್ನ ಕೀರ್ತನೆಗಳಲ್ಲಿ ಒಂದಾದ ಇದನ್ನು ನಿಧಾನಗತಿಯಲ್ಲಿ ಸೊಗಸಾಗಿ ಹಾಡಿದರು. ಹಾಗೇ "ಪರಿಯಾಚಕಮಾ"ವನ್ನು ವನಸ್ಪತಿ ರಾಗದಲ್ಲಿ ಹಾಡಿದರು. ಅವರ ಮೆಚ್ಚಿನ ರಾಗ ಕಲ್ಯಾಣಿಯಲ್ಲಿ ಆಲಾಪನೆ ಮಾಡಿ "ಇನ್ನು ದಯ ಬಾರದೆ ದಾಸನ ಮೇಲೆ" ಹಾಡಿದರು.

ಚಿತ್ರ : ಎಡದಿಂದ ವಿದ್ವಾನ್ ತಿರುವಾರೂರು ಭಕ್ತವತ್ಸಲಂ, ವಿದ್ವಾನ್ ವೈಕೋಂ ಗೋಪಾಲಕೃಷ್ಣನ್, ಡಾ| ಕೆ. ಜೆ. ಏಸುದಾಸ್, ವಿದ್ವಾನ್ ನಾಗೈ ಮುರಳೀಧರನ್


ಚಿತ್ರ : ಡಾ| ಕೆ. ಜೆ. ಏಸುದಾಸ್

ಚಿತ್ರ : ವಿದ್ವಾನ್ ತಿರುವಾರೂರು ಭಕ್ತವತ್ಸಲಂ

ಏಸುದಾಸ್ ಕಛೇರಿ ಮಧ್ಯೆ ಅಲ್ಲಿ-ಇಲ್ಲಿ ಮಾತಾಡೋದು ಸಾಮಾನ್ಯ. ಅವರ ಮಾತಿನ ಕೆಲವು ತುಣುಕುಗಳು -
I have become grand father, but I am not grand in Music.

Turn your face to right while singing base/lower notes. Turn your face to left while singing higher notes.

Use "da" in alapana for base notes. Use "na" in alapana in higher notes.

I am following it, so I am advising it to you. If it is not good I will not advise.

Kanakangi 1st melakarta raga. I have practiced it for 3-4 years before performing on stage. People were telling me "why are you trying that difficult raga?". Then I told "Why ancestors kept that raga? Why Thyagaraja composed a krithi in that raga?".

Learn with dedication. Always think about your work. Then only you can do good. Lakshmi is tricky & hidden, but Saraswathi will be always there.

Gamaka is very essential in Carnatic Music, but unnecessary gamaka should not be used.

ಸಭಿಕರ ಬೇಡಿಕೆಗಳು ಸಾಕಷ್ಟಿದ್ದವು. ಆದರೆ " ಅಲೈಪಾಯುದೆ", "ಕೃಷ್ಣಾ ನೀ ಬೇಗನೇ ಬಾರೋ", " ಹರಿವರಾಸನಂ" ಹಾಡಿ ೧೦-೨೦ ಘಂಟೆಗೆ ಕಛೇರಿ ಮುಕ್ತಾಯಗೊಳಿಸಿದರು. ಮುಂಬರುವ ಮಹಾ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತ ಚಲಾಯಿಸಲು ಕರೆ ಕೊಟ್ಟರು.

ಅವರು ಹಾಡಿದ ಕೃತಿಗಳು:
೧. ಸರಸಾಂಗಿ - ವರ್ಣ - ಆದಿ
೨. ಓಂಕಾರ ಪುರುಳೇ - ಭವಾಭರಣಂ(ಹಂಸ ವಿನೋದಿನಿ) ರಾಗ
೩. ಗುರುವಿನ ಯಾಕೆ ಮರೆಯುವಿರಣ್ಣಾ - ವಂದನಧಾರಿಣಿ ರಾಗ
೪. ಹರಿಯದಾಸರಿಗೆ ಸರಿಯುಂಟೆ ಹರಿಯ ನಂಬಿದವರಿಗೆ ಕೇಡುಂಟೆ - ಪುರಂದರದಾಸ
೫. ಎಂದರೋ ಮಹಾನುಭಾವುಲು - ಶ್ರೀರಾಗ - ಆದಿ - ತ್ಯಾಗರಾಜರು
೬. ನಿನ್ನ ನೋಡಿ ಧನ್ಯನಾದೆನೊ ಹೇ ಶ್ರೀನಿವಾಸ
೭. ಕ್ಷೀರಸಾಗರ ಶಯನ - ದೇವಗಾಂಧಾರಿ - ತ್ಯಾಗರಾಜರು
೮. ಪರಿಯಾಚಕಮಾ - ವನಸ್ಪತಿ - ರೂಪಕ - ತ್ಯಾಗರಾಜರು
೯. ಇನ್ನು ದಯ ಬಾರದೆ ದಾಸನ ಮೇಲೆ - ಕಲ್ಯಾಣಿ
೧೦. ಏನು ವರವ ಬೇಡಲಿ ನಾನು ಮನವರಿತು ನೀಡು ಶಬರೀಶ್ವರನೆ
೧೧. ಕೊಟ್ಟ ಭಾಗ್ಯವೆ ಸಾಕೋ
೧೨. ರಂಗ ಬಾರೋ ಪಾಂಡುರಂಗ ಬಾರೋ
೧೩. ಅಲೈಪಾಯುದೆ - ಕಾನಡ - ಆದಿ - ಉತ್ತುಕ್ಕಾಡು ವೆಂಕಟ ಸುಬ್ಬಯ್ಯರ್
೧೪. ಕೃಷ್ಣಾ ನೀ ಬೇಗನೇ ಬಾರೋ - ಯಮನ್ ಕಲ್ಯಾಣಿ - ಛಾಪು - ವ್ಯಾಸರಾಯರು
೧೫. ಎಲ್ಲೆಲ್ಲು ಸಂಗೀತವೇ (ಕನ್ನಡ ಚಿತ್ರ "ಮಲಯಮಾರುತ"ದಿಂದ)
೧೬. ಹರಿವರಾಸನಂ
೧೭. ಪವಮಾನ

|| ಶುಭಂ ||


Tags : 71st Ramanavami Music Festival, April-May 2009, Kote High School Grounds, Sri Ramaseva Mandali Chamarajpet Bangalore, Carnatic Classical Music, Dr K J Yesudas, Vid. Nagai Muralidharan, Vid. Tiruvarur Bhaktavatsalam, Vid. Vaikom Gopalakrishnan

No comments:

Post a Comment